ಫೆಬ್ರುವರಿ 8 ಬುಧವಾರ ರೇಡಿಯೋ ಸಂಜೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷರಾದ ಶ್ರೀ ಹರ್ಷ ಅವರು ಭಾಗವಹಿಸಿದ್ದರು. ಅಂಚೆ ಇಲಾಖೆ ನಡೆದು ಬಂದ ದಾರಿ, ಬದಲಾವಣೆಗಳು, ಇಂದಿನ ಅಗತ್ಯತೆಗಳು, ಪೋಸ್ಟ್ ಮಾಸ್ಟರ್, ಪೋಸ್ಟ್ ಮ್ಯಾನ್ ಗಳ ಜವಾಬ್ದಾರಿಗಳ ಜೊತೆಗೆ ಅಂಚೆ ಇಲಾಖೆಯಲ್ಲಿರುವಂತ ಉದ್ಯೋಗಾವಕಾಶಗಳ ಬಗೆಗೆ ಮಾಹಿತಿಯನ್ನು ನೀಡಿದರು.