'ಋತುಚಕ್ರವೆಂಬುದು ಸ್ವಾಭಾವಿಕ, ಇದು ಯಾವುದೇ ರೋಗವಲ್ಲ,' ಎಂದು ಮಂಗಳೂರಿನ ರೋಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್’ನ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದ ಸಹಪ್ರಾಧ್ಯಪಕರದ ಅನುರಾಧ ಶೆಟ್ಟಿಯವರು ತಿಳಿಸಿದರು.
ಇವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾರ್ಚ್ 8ರಂದು ಋತುಚಕ್ರ ಮತ್ತು ಸ್ವಚ್ಛತಾ ಅರಿವು ಎಂಬ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.