‘ಬದುಕೆಂಬ ಪಯಣವು ಕವಿತೆಗಳಿಂದ ತುಂಬಿರಬೇಕು,’ ಎಂದು ಕವಿ ಆಂಡ್ರ್ಯೂ ಎಲ್. ಡಿ. ಕುನ್ಹಾ ಅವರು ಅಭಿಪ್ರಾಯಪಟ್ಟರು. ಇದೇ ಜನವರಿ 29ರಂದು ರೇಡಿಯೋ ಸಾರಂಗ್ 107.8FM ಇದರ ‘ತಾಳೊ ಉಮಾಳೊ’ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ನಾಲ್ವತ್ತು ವರುಷಗಳ ಸಾಹಿತ್ಯಮಯ ಬದುಕಿನ ಅನಾವರಣವನ್ನು ಕವಿತಾಮಯಾವಾಗಿ ಬಣ್ಣಿಸಿದರು.
ಆಂಡ್ರ್ಯೂ ಅವರ ಜನನ ಗುರುಪುರ ಕಿನ್ನಿಕಂಬ್ಳದಲ್ಲಿ ಆಯಿತು. ಈಗಾಗಲೇ ಅದ್ಭುತ ಕವಿತೆಗಳನ್ನು ರಚಿಸಿರುವ ಇವರು, 600ಕ್ಕೂ ಮಿಕ್ಕಿ ಕವಿತೆಗಳನ್ನು ರಚಿಸಿದ್ದಾರೆ. ಮೂರು ಕವಿತಾ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಅವರ ‘ಅಂಜೂರಾಚೆಂ ಪಾನ್’ ಪುಸ್ತಕಕ್ಕೆ ನಾಲ್ಕು ಪ್ರಶಸ್ತಿಗಳು ಬಂದಿವೆ.