“ದಕ್ಷಿಣ ಕನ್ನಡ ಜಿಲ್ಲೆಯ ನೀರು ಪರೀಕ್ಷಣಾ ಕೇಂದ್ರ ಎನ್ ಎ ಬಿ ಎಲ್ ಮಾನ್ಯತೆ ಪಡೆದ ಕರ್ನಾಟಕದ ಮೊದಲ ಪರೀಕ್ಷಣೆ ಕೇಂದ್ರವಾಗಿದ್ದು ಇದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ,” ಎಂದು ನವೆಂಬರ್ 21 ರಂದು ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ನರೇಂದ್ರಬಾಬು ತಿಳಿಸಿದರು.
ಸ್ವಚ್ಛವಾಗಿ ಕಾಣುವ ನೀರು ಶುದ್ಧವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಸಾರ್ವಜನಿಕರಿಗೆ ನೀರನ್ನು ಪರೀಕ್ಷಿಸಬೇಕೆಂದು ಇದ್ದರೆ ನಮ್ಮ ಪರೀಕ್ಷಣಾ ಕೇಂದ್ರಕ್ಕೆ ಬಂದು ನಿಗದಿಪಡಿಸಿದ ಕನಿಷ್ಠ ಮೊತ್ತವನ್ನು ಕೊಟ್ಟು ತಮ್ಮ ನೀರಿನ ಪರೀಕ್ಷೆಯನ್ನು ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಅನೇಕ ಕೇಳುಗರು ಕರೆಯನ್ನು ಮಾಡಿ ತಮ್ಮ ಪ್ರಶ್ನೆ ಹಾಗೂ ಗೊಂದಲಗಳಿಗೆ ಉತ್ತರವನ್ನು ಕಂಡುಕೊಂಡರು. ಕುಡಿಯುವ ನೀರಿನ ಸ್ವಚ್ಛತೆ, ಬಾವಿ ನೀರಿನ ಸ್ವಚ್ಛತೆ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಕೇಳುಗರಿಗೆ ತಿಳಿಸಿಕೊಟ್ಟರು. ಎನ್ ಎ ಬಿ ಎಲ್ ಮಾನ್ಯತೆ ಎಂದರೇನು, ಮಾನ್ಯತೆಗೆ ಇರುವ ಮಾನದಂಡಗಳು ಏನು, ಇದರಿಂದ ಜಿಲ್ಲೆಗೆ ಲಾಭವೇನು ಅದರ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ನರೇಂದ್ರ ಬಾಬು ಅವರು ತಿಳಿಸಿ ಕೊಟ್ಟರು.
- ಅಭಿಷೇಕ್ ಶೆಟ್ಟಿ, ರೇಡಿಯೋ ಸಾರಂಗ್